Posts

Showing posts from May, 2020

ಆಶಯ

Image
   ದಿನವೂ ಬಸ್ಸಿಂದ ಇಳಿದು , ರಸ್ತೆ ದಾಟುವಾಗ ಕಣ್ಣುಗಳನ್ನು ಸಣ್ಣ ಮಾಡಿ , ದಯವಿಟ್ಟು ನಿಧಾನಿಸಿ ಎಂಬಂತೆ ಮುಖವನಿಟ್ಟು   ವೇಗವಾಗಿ ಹೋಗುವ ವಾಹನಗಳನ್ನು ನಿಲ್ಲುವಂತೆ ಮಾಡುವ ಪುಟ್ಟ ಪ್ರಯತ್ನ ಇವಳದು. ಒಂದು ವೇಳೆ ನಿಲ್ಲಿಸಿದರೆ , ಅವರ ದಿನಚರಿ ಅದ್ಭುತವಾಗಿರಲ ಎಂದು ಮನಸಾ ಪ್ರಾರ್ಥಿಸುವಳು .ಹೀಗೆ ಮಾಡಿದಾಗ ನಿಲ್ಲಿಸುತ್ತಿದ್ದ ವಾಹನಗಳು ಕೆಲವೇ ಕೆಲವು ಮಾತ್ರ. ರಸ್ತೆಯ ಇನ್ನೊಂದು ಕಡೆ ಇರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಈಕೆ. ವಾಹನ ಚಲಾಯಿಸುತ್ತಿರುವ ಯಾರೇ ಇವಳನ್ನು ನೋಡುವ ವ್ಯವಧಾನ ತೋರಿದ್ದರೆ , ಶಾಲೆಗೆ ಹೋಗುವ ಮಗುವೇನೋ ಅಂದುಕೊಳ್ಳುವಂತಹ ಮುಗ್ಧ ಮುಖ ಇವಳದು.ಹೀಗೆ ಒಂದು ದಿನ ವಾಹನ ನಿಲ್ಲಿಸಿದ ಇವನಿಗೆ ಇವಳ ಮುಗ್ಧತೆ ತುಂಬಾ ಇಷ್ಟವಾಗಿತ್ತು. ಅಷ್ಟೇ ಅಲ್ಲದೆ ಆ ದಿನ ಅವನು ಕನಸಿನಲ್ಲಿಯೂ ಯೋಚಿಸಲು ಅಸಾಧ್ಯವಾದ ಒಂದೊಳ್ಳೆ ಬೆಳವಣಿಗೆ ಅವನ ವ್ಯವಹಾರದಲ್ಲಿ ಆಗಿತ್ತು.ಅಂದಿನಿಂದ ಪ್ರತಿನಿತ್ಯ ಆಕೆ ರಸ್ತೆ ದಾಟುವ ಸಮಯಕ್ಕೆ ಸರಿಯಾಗಿ ಅಲ್ಲಿ ತಲುಪುತ್ತಿದ್ದ. ಒಂದು ವೇಳೆ ಬೇಗ ತಲುಪಿದರು ಆಕೆಯ ಬರುವಿಕೆಗೆ ಕಾಯುತ್ತಿದ್ದ. ಆಕೆಯ ಮುಗ್ಧ ಮುಖ ಅವನಲ್ಲಿ ಸಮಾಧಾನ ತರುತ್ತಿತ್ತು. ಆಕೆ ತುಂಬು ಮನಸ್ಸಿನಿಂದ ಒಳ್ಳೆಯದು ಆಗಲೆಂದು ಹಾರೈಸಿದಂತೆ ಅನಿಸುತ್ತಿತ್ತು ಕೂಡ. ಅವಳಿಗೂ ಅದೆಷ್ಟು ರೂಢಿ ಆಗಿತ್ತು ಅಂದರೆ ಈಗೆಲ್ಲ ಮುಖವನ್ನು ಸಣ್ಣ ಮಾಡಿ ಸೀದ ರಸ್ತೆ ದಾಟಿ ಹೋಗುವಳ , ಕಿರು ನಗುವೊಂದನ್ನು   ಬೀರುತ್ತಾ. ಅಂದು ...

#48, ಸಿರಿ ದೇವ ಮತ್ತು ಗಾಜಿನ ಜಾಡಿಗಳು

Image
ಅದು ಮಬ್ಬುಗತ್ತಲೆಯ ಕೋಣೆ. ಇಡೀ ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚಿನ ಸೌಲಭ್ಯ ಸಿಗುವ ಏಕೈಕ ಕೋಣೆ #48. ನನ್ನ ಅದೃಷ್ಟ—ಅಲ್ಲಿ ಸೇರಿಕೊಂಡೆ. ಅಲ್ಲಿ ಮೊದಲೇ ಬಿಡಾರ ಹೂಡಿದ್ದ ಸಿರಿ ದೇವಿ ನನಗೆ ಕೋಣೆಯ ವಿಶೇಷತೆಗಳನ್ನು ಹೇಳಿದಳು. ಕೋಣೆಯ ಒಂದು ಮೂಲೆ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿತ್ತು. ಹಾಗಾಗಿ ಅಲ್ಲಿ ಯಾರೂ ಜಾಂಡ ಊರುವ ಹಾಗಿರಲಿಲ್ಲ. ಇದರಿಂದ ಅಲ್ಲಿ ಇಬ್ಬರಿಗೆ ಮಾತ್ರ ಅವಕಾಶ—ಇದು ಮತ್ತಾವ ಕೋಣೆಯಲ್ಲೂ ಸಿಗದು. ಇನ್ನು ಹೀಗೆ ಮಳೆಯ ನೀರಿನಿಂದ ತುಕ್ಕು ಹಿಡಿದ ಕಂಬಿಯ ಕಿಟಕಿಯನ್ನು ಸ್ಲೈಡಿಂಗ್ ವಿಂಡೋವಾಗಿ ಮಾರ್ಪಾಟು ಮಾಡಿದ್ದರು. ಯಾವುದೋ ಖಾಸಗಿ ದ್ವೀಪದ, ಗಗನಚುಂಬಿ ವಸತಿಗೃಹದ ತುದಿಯ ಕೋಣೆಯ ಕಿಟಕಿಯಂತೆ ನಮಗೆ ಅನ್ನಿಸುತ್ತಿತ್ತು. ಅದಕ್ಕೆ ಕಾರಣ—ಈ ಕಿಟಕಿಯನ್ನು ತಳ್ಳಿದಾಗ ಆಕಾಶ, ಸಂಪೂರ್ಣ ಹಸಿರು ಮರಗಳು, ಪಕ್ಷಿಗಳು, ಅಳಿಲುಗಳು ಇವೆಲ್ಲ ಕಾಣಿಸುತ್ತಿದ್ದವು. ಮಾರ್ಗ ಬದಿಯಾಗಿರದ ಕಾರಣ ವಾಹನದ ಸದ್ದುಗದ್ದಲವೂ ಇರಲಿಲ್ಲ. ಒಟ್ಟಿನಲ್ಲಿ ನಮ್ಮ ಇಂದ್ರಲೋಕವೇ ಇದಾಗಿತ್ತು. ಸದಾ ನಗು-ಕುಶಿ; ಯಾವ ಚಿಂತೆಯೂ ಇಲ್ಲಿ ಇರಲಿಲ್ಲ. ಬಂದರೂ ಅವು ನೀರಿನ ಮೇಲಿನ ಗುಳ್ಳೆಗಳಂತೆ. ಬೆಳ್ಳಂಬೆಳಗ್ಗೆ ಎದ್ದು ಬಿಸಿನೀರು ಮಾಡುವ ಕೆಲಸ ನನಗಾದರೆ, ಅಂದಿನ ಧರಿಸುವ ಬಟ್ಟೆಗಳ ಇಸ್ತ್ರಿ ಕೆಲಸ ಸಿರಿಯದ್ದು. ಇನ್ನು ಮೆಸ್ಸಿನಲ್ಲಿ ಇಬ್ಬರಿಗೂ ತಿಂಡಿ ಬಡಿಸಿ ತರುವ ಕೆಲಸ ನನ್ನದು, ಮತ್ತು ನೀರಿನ ಕುಪ್ಪಿ ತುಂಬಿಸುವ ಕೆಲಸ ಸಿರಿಯದ್ದು. ಅಷ್ಟೇ ಅಲ್ಲ—ಬಸ್ಸಿನಲ್ಲಿ...

ನಿರ್ಧಾರ

Image
ಒಂದಾನೊಂದು ಕಾಲದಲ್ಲಿ ರಾಜಧಾನಿಯಾಗಿದ್ದ ಊರು ರಾಜಪಟ್ಣ. ಹಾಗಾಗಿ ಕೆಲ ದಶಕಗಳ ಹಿಂದೆ ಇಲ್ಲಿನ ಜನರು ನಿಧಿಯ ಆಸೆಗೆ ಅದೆಷ್ಟೋ ಭೂಮಿಯನ್ನು ಅಗಿದು ತಮ್ಮ ಅದೃಷ್ಟ ಪರೀಕ್ಷಿಸಿದ್ದು ಉಂಟು. ಅದರಲ್ಲಿ ಕೆಲವೇ ಕೆಲವರಿಗೆ ಲಕ್ಷ್ಮಿ ಒಲಿದಿದ್ದಾಳೆ ಎಂದು ಗುಮಾನಿಗಳಿವೆ.      ಇದರ ವ್ಯಾಪ್ತಿಗೆ ಬರುವ ಗೌರ, ಕಾಡು, ಪಕ್ಷಿ ಪ್ರಪಂಚ, ಶುದ್ಧ ನೀರಿನ ನದಿ ಇವೆಲ್ಲ ಇರುವ ಸಮೃದ್ಧವಾದ ಗ್ರಾಮ. ಶಂಭು ಭಟ್ಟರ ಮನೆ, ೩೦೦ ಬಟ್ಟಿ ಭೂಮಿ, ಹತ್ತು ಎಕರೆ ಗುಡ್ಡೆ ಇದ್ದದ್ದು ಇದೇ ಗೌರದಲ್ಲಿ. ಭಟ್ಟರು ಪುಸ್ತಕದಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಅದರಲ್ಲಿ ಬರುತ್ತಿದ್ದ ಸಂಬಳ ಹಾಗೂ ಸಣ್ಣ ಪುಟ್ಟ ಕೃಷಿಯಿಂದ ಬರುತ್ತಿದ್ದ ಹಣದಿಂದ ಮಡದಿ ಲಕ್ಷ್ಮಮ್ಮ ಹಾಗೂ ನಾಲ್ಕು ಮಕ್ಕಳ ಸಂಸಾರ ಮುಂದೆ ಸಾಗಿತ್ತು. ಸ್ವಾತಂತ್ರ ದಿನಾಚರಣೆಯಂದು ಭಟ್ಟರು ಚೌಚೌ ಹಾಗೂ ಜಿಲೇಬಿ ತರುತ್ತಿದ್ದರು ಅಂದು ಎಲ್ಲ ಮಕ್ಕಳು ಚೀರುತ್ತಾ ಕೇಕೆ ಹಾಕುತ್ತಾ ಸಂಭ್ರಮಿಸುತ್ತಿದ್ದರು. ಅದಲ್ಲದೆ ತಿಂಗಳಿಗೊಮ್ಮೆ ಮಾತ್ರ ಮಾಡುವ ಚಾಯ , ಆರು ತಿಂಗಳಿಗೊಮ್ಮೆ ಮಾಡುವ ಉಪ್ಪಿಟ್ಟು, ಚಪಾತಿಗು ಇದೆ  ಸಂಭ್ರಮವಿರುತ್ತಿತ್ತು.ಅಮ್ಮನವರು ಕೂಡ ನರೆಯಲ್ಲಿದ್ದ ತಮ್ಮನ ಕುಟುಂಬ ಹಾಗೂ ಅವರ ಮಕ್ಕಳನ್ನು ತಮ್ಮ ಮಕ್ಕಳಷ್ಟೇ ಪ್ರೀತಿಸುತ್ತಿದ್ದರು. ಶಂಭು ಭಟ್ಟರು ಒಬ್ಬನೇ ಮಗನಾದದ್ದರಿಂದ ಅವರ ಅಣ್ಣ ತಮ್ಮಂದಿರು ಇರಲಿಲ್ಲ.ಆಸ್ತಿ ಅಂತಸ್ತಿನಲ್ಲಿ ಬಡತನವಿದ್ದರೂ ಹೃದಯ ಶ್ರೀಮಂತರಾಗಿದ್...